Wednesday, 4 July 2012

ಕಲ್ಪನೆಗಳ ಕನವರಿಕೆಯಲ್ಲಿ ಮನಸಿಗೆ ತೋಚಿದ ಹಾಗೆ ಗೀಚಿದ ಕವನಗಳು


ನಿನ್ನೆ ಕಣ್ಣು ಮುಚ್ಚಿ

ಕಣ್ಣಂಚಲ್ಲಿ ಕಂಡ

ಕನಸು ಅದು

ಇಂದು ಕಣ್ಣಾಲಿಗಳ

ಕಣ್ಣೀರಲ್ಲಿ ಕರಗಿ ಹೋಗಿದೆ.......... SBK


ಸುರಿವ ಮಳೆಯ

ನಡುವೆ ಕೊಡೆಯ

ಹಿಡಿದು ನಡೆಯುತಿರೆ

ನೀ ಜೊತೆಗಿರಲು

ಇಡುವ ಪ್ರತಿ ಹೆಜ್ಜೆಯಲು

ಹೊಸತನವೇ ತುಂಬಿಹುದು.......... SBK


ಅಮವಾಸೆಯ

ಕಡು ಕತ್ತಲಲಿ

ಕಣ್ಣು ತೆರೆದು

ನೋಡಿದರೂ

ಕೂಡ ಕಾಣುವುದು

ಬರಿ ಕಪ್ಪು ಬಣ್ಣವೇ.........SBK


ಹುಣ್ಣಿಮೆಯ
ಬೆಳದಿಂಗಳು
ಎಷ್ಟು ಚೆಲ್ಲಿದ್ದರೂ
ಕಣ್ಣು ಮುಚ್ಚಿ ಕುಳಿತರೆ
ಕಾಣುವುದು ಕಡು ಕಪ್ಪೇ ... :) PBS :)


ಕನಸುಗಳೆಂದರೆ
ಕಣ್ಣುಗಳೊಳಗೆ
ಬಣ್ಣ ಬಣ್ಣದ
ಚಿತ್ತಾರ ಬಿಡಿಸುವ
ಮನಸಿನ ಒಳಗೆ
ಸುಮಧುರ ಭಾವಗಳನು
ಮೂಡಿಸುವ ಒಂದು ಸುಂದರ ಯಾನ ...............-SBK



ಸತ್ತು ಹೋಗಿರುವ ಭಾವನೆಗಳ ನಡುವೆ

ಬಿಟ್ಟು ಹೋಗಿರುವ ಭಾಂಧವ್ಯಕ್ಕೇನು ಬೆಲೆ

ಉಸಿರಿಗೆ ಉಸಿರೇ ನಿಂತು ಹೋಗಿರುವಾಗ ...

ಅಳಿದಅಳಿದುಹೋಗುವ ದೇಹಕ್ಕಿನ್ನೇನು ಬೆಲೆ..... -SBK



ಮರಳುಗಾಡಿನಲಿ ನೆರಳು ದೊರೆತಂತೆ

ಬರಡು ಭೂಮಿಯಲಿ ಮಳೆ ಸುರಿದಂತೆ

ಕಾರಿರುಳ ಕತ್ತಲಲಿ ಬೆಳಕು ಹರಿದಂತೆ

ನೀ ಬಂದಿರುವೆ ನನ್ನ ಬಾಳಲಿ

ನೀನಿಲ್ಲದೆ ನಾ ಹೇಗೆ ಬಾಳಲಿ??? ..... -SBK

Monday, 16 January 2012

ಈ ಮಣ್ಣಿಗೆ ನಾ ಚಿರಋಣಿ-ee mannige naa chiraruni

ಈ ಮಣ್ಣಿಗೆ ನಾ ಚಿರಋಣಿ - ನಮ್ಮಣ್ಣಿಗೆ ನಾ ಚಿರಋಣಿ
ಈ ಮಾತೃಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೆ
ನಮಸ್ತೆ.. ನಮಸ್ತೆ ನಮಸ್ತೆ.... ಸತೀಶ್ ಬಿ ಕನ್ನಡಿಗ